![actor chethan in controversy- 'ಆ ದಿನಗಳು' ಹೀರೋ ಮೇಲೆ ಬ್ರಾಹ್ಮಣರ ಕೆಂಗಣ್ಣು; ಬೇಷರತ್ ಕ್ಷಮೆಗೆ ಒತ್ತಾಯ actor chethan in controversy- 'ಆ ದಿನಗಳು' ಹೀರೋ ಮೇಲೆ ಬ್ರಾಹ್ಮಣರ ಕೆಂಗಣ್ಣು; ಬೇಷರತ್ ಕ್ಷಮೆಗೆ ಒತ್ತಾಯ](https://blogger.googleusercontent.com/img/b/R29vZ2xl/AVvXsEj5Ujl9C-E8809JDACGBzFAP5vYrOXC4A5h643UklMFPkRHYpGuy6OqiqsxjV8buT4kaQ48x-rCkb27Hq9mHk_SIc1O055tR7N5dOCNiQyzb7htCyh574zBB52Ji1CPkoSKmbKpmOoGsF0/w640-h428/Actor+Chethan.jpg)
actor chethan in controversy- 'ಆ ದಿನಗಳು' ಹೀರೋ ಮೇಲೆ ಬ್ರಾಹ್ಮಣರ ಕೆಂಗಣ್ಣು; ಬೇಷರತ್ ಕ್ಷಮೆಗೆ ಒತ್ತಾಯ
Monday, June 7, 2021
ಬೆಂಗಳೂರು: ಬ್ರಾಹ್ಮಣ್ಯದ ಬಗ್ಗೆ ಆ ದಿನಗಳು ಖ್ಯಾತಿಯ ನಟ ಚೇತನ್ ಅವರು ಅವ ಹೇಳನಾ ಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬ್ರಾಹ್ಮಣರ ಅಭಿವೃದ್ಧಿ ಮಂಡಳಿ ಪೊಲೀಸರಿಗೆದೂರು ನೀಡಿದೆ.
ವಿರುದ್ಧ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ನೇತೃತ್ವದ ತಂಡ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ನಟ ಚೇತನ್ ಅವರು ಬ್ರಾಹ್ಮಣಿಕೆ ಹಾಗೂ ಬ್ರಾಹ್ಮಣತ್ವದ ಕುರಿತು ಭಯೋತ್ಪಾದಕರ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ವರದಿಯಾಗಿದೆ.
ಚೇತನ್ ಅವರು ಬ್ರಾಹ್ಮಣ ಸಮುದಾಯದ ಬಳಿ ಬೇಷರತ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಮತ್ತೊಮ್ಮೆ ಸಮುದಾಯದ ವಿರುದ್ಧ ಮಾತನಾಡಬಾರದು ಎಂದು ತಾಕೀತು ಮಾಡಿದ್ದಾರೆ ಎಂದು ವರದಿಯಾಗಿದೆ.