
Aruna Masala App unveiled : ಅಬತರ ಚಿತ್ರ ತಂಡದಿಂದ "ಅರುಣಾ ಮಸಾಲಾ" ಆಪ್ ಬಿಡುಗಡೆ
ಅಬತರ ಚಿತ್ರ ತಂಡದಿಂದ "ಅರುಣಾ ಮಸಾಲಾ" ಆಪ್ ಬಿಡುಗಡೆ
ಮಂಗಳೂರು: ನಗರದ ಪ್ರಸಿದ್ಧ ಮಸಾಲೆ ತಯಾರಿಕಾ ಕಂಪೆನಿ "ಅರುಣಾ ಮಸಾಲಾ ಆಪ್" ಅನ್ನು ನಗರದ ಫಿಜಾ ಫಾರಂ ಮಾಲ್ನಲ್ಲಿ ಬಿಡುಗಡೆ ಮಾಡಲಾಯಿತು. ತುಳು ಚಿತ್ರ ನಟ ಅರ್ಜುನ್ ಕಾಪಿಕಾಡ್ ಆಪ್ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅರ್ಜುನ್ ಕಾಪಿಕಾಡ್, ತುಳು ಭಾಷೆಗೆ, ತುಳು ಚಲನಚಿತ್ರಕ್ಕೆ ಸಹಾಯ ಮಾಡಿದ ಅರುಣಾ ಮಸಾಲಾ ಸಂಸ್ಥೆಗೆ ಆಭಾರಿಯಾಗಿದ್ದೇನೆ ಎಂದರು. ಅಬತರ ಚಲನಚಿತ್ರದ ನಟಿ ಗಾನ ಭಟ್, ಅರುಣಾ ಮಸಾಲಾ ಸಂಸ್ಥೆಗೆ ಶುಭ ಹಾರೈಸಿದರು.
ಅರುಣಾ ಮಸಾಲಾ ಸಂಸ್ಥೆಯ ಪಾಲುದಾರರಾದ ಅನಂತೇಶ್ ಪ್ರಭುರವರು "ಅಬತರ" ಚಲನ ಚಿತ್ರ ತಂಡ ತಮ್ಮನ್ನು ಗುರುತಿಸಿದಕ್ಕಾಗಿ ಅಭಿನಂದನೆಗಳು, ಮುಂದಕ್ಕೂ ಇದೇ ರೀತಿ ಸಹಕಾರವಿರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ತುಳು ಚಿತ್ರ ನಟ ದೇವದಾಸ್ ಕಾಪಿಕಾಡ್, 'ಅಬತರ' ತುಳು ಫಿಲ್ಮ್ನ ನಟಿ ಗಾನ ಭಟ್, ಅರುಣಾ ಮಸಾಲಾ ಸಂಸ್ಥೆ ಪಾಲುದಾರ ಅನಂತೇಶ್ ಪ್ರಭು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ "ಅಬತರ" ತುಳು ಚಲನಚಿತ್ರದ ಆಡಿಯೋ ಬಿಡುಗಡೆ ಮಾಡಲಾಯಿತು. ತುಳು ಚಲನಚಿತ್ರ "ಅಬತರ"ದ ತಂಡವು ಉಭಯ ಜಿಲ್ಲೆ ಮತ್ತು ಹಲವು ಕಡೆ ತನ್ನ ಚಲನಚಿತ್ರಕ್ಕೆ ಪ್ರಚಾರ ಅಭಿಯಾನ ನಡೆಸುತ್ತಿದ್ದು, ಅಲ್ಲೆಲ್ಲ ಅರುಣಾ ಮಸಾಲಾ ಸಂಸ್ಥೆಯ ಆಪ್ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡುತ್ತದೆ. ಅರುಣಾ ಮಸಾಲಾ ಸಂಸ್ಥೆ "ಅಬತರ" ಚಲನ ಚಿತ್ರಕ್ಕೆ ಪ್ರಾಯೋಜಕತ್ವ ನೀಡುತ್ತಿದ್ದು, ಅಲ್ಲದೆ ತುಳು ಚಿತ್ರ ತಂಡವನ್ನು ಪ್ರೋತ್ಸಾಹಿಸುತ್ತಿದೆ ಎಂದು "ಅಬತರ" ತಂಡದ ಪ್ರವರ್ತಕರು ತಿಳಿಸಿದ್ದಾರೆ.
"ಅರುಣಾ ಮಸಾಲಾ ಆಪ್" ಅರುಣಾ ಮಸಾಲ ಸಂಸ್ಥೆಯ ಒಂದು ವಿನೂತನ ತಂತ್ರಾಂಶ, ಮೊಬೈಲ್ ಸಾಧನಗಳಲ್ಲಿ ಮತ್ತು ಟ್ಯಾಬ್ಲೆಟ್, ಕಂಪ್ಯೂಟರ್ಗಳಲ್ಲಿ ಸರಳವಾಗಿ ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿದೆ. ಬಹಳ ಸುಲಭ ಮತ್ತು ಅನುಕೂಲಕರ.
ಸಿಂಗಲ್ ಟಚ್ ಮೂಲಕ ಆಪ್ ಗೆ ಸುಲಭ ಪ್ರವೇಶ.
ಆಪ್ ನಲ್ಲಿ ಅರುಣಾ ಮಸಾಲೆಯ ಸಂಪೂರ್ಣ ಮಾಹಿತಿ:
ಇಚ್ಛಿಸಿದ ಮಸಾಲಾ ಪದಾರ್ಥಗಳನ್ನು ಒಂದೇ ಕ್ಲಿಕ್ನಲ್ಲಿ ಖರೀದಿಸುವ ಅವಕಾಶ. ತಕ್ಷಣ ಬಯಸಿದ ಸ್ಥಳಕ್ಕೆ ಮುಟ್ಟಿಸುವ ಕಾರ್ಯ. (ದೇಶದ ಯಾವುದೇ ಸ್ಥಳಕ್ಕೆ ನಿಗದಿತ ಸಮಯಕ್ಕೆ ತಲುಪಿಸಲಾಗುವುದು. ವಿತರಣಾ ಶುಲ್ಕ ಸಂಪೂರ್ಣ ಉಚಿತವಾಗಿರುತ್ತದೆ.).
ಆಪ್ ಸಂಪೂರ್ಣ ಉಚಿತವಾಗಿದ್ದು ಬಳಸಲು ಯಾವುದೇ ಶುಲ್ಕವಿಲ್ಲ. ಇದು ಎಂದೆಂದಿಗೂ ಉಚಿತವಾಗಿರುತ್ತೆ ಎಂದು ಕಂಪನಿಯು ಖುದ್ದು ಹೇಳಿಕೊಂಡಿದೆ.
ಅರುಣಾ ಮಸಾಲಾ ಸಂಸ್ಥೆಯ ಬಗ್ಗೆ: ಮಂಗಳೂರು ನಗರದ ಬೈಕಂಪಾಡಿ ಕೈಗಾರಿಕಾ ಪ್ರಾಂಗಣದಲ್ಲಿ ನೆಲೆಗೊಂಡಿರುವ ಅರುಣಾ ಮಸಾಲಾ ಕಂಪೆನಿ 1980ರಿಂದ ಜನತೆಗೆ ರುಚಿ ಮತ್ತು ನಂಬಿಕೆಗೆ ಹೆಸರುವಾಸಿಯಾಗಿ ಬೆಳೆದು ಬಂದಿದೆ.
ಅರುಣಾ ಮಸಾಲಾ ಕಂಪೆನಿ ISO 22000:2005 ಪ್ರಮಾಣೀಕರಣ ಪತ್ರವನ್ನು ಪಡೆದ ಕರಾವಳಿ ಕರ್ನಾಟಕದ ಮೊದಲ ಮಸಾಲೆ ಸಂಸ್ಕರಣಾ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಹಾರ ಉತ್ಪನ್ನಗಳ ಅತ್ಯುನ್ನತ ಶ್ರೇಣಿಯ ಮಸಾಲೆ ಪುಡಿಗಳು, ಮಿಶ್ರಿತ ಮಸಾಲೆ ಪುಡಿಗಳು, ತ್ವರಿತ ತಯಾರಿಕೆಯ ಮಿಶ್ರಣಗಳು, ಉಪ್ಪಿನಕಾಯಿ ಮತ್ತು ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಅನ್ನು ಒಳಗೊಂಡಿದೆ.
ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಕೇರಳ ಮಾತ್ರವಲ್ಲದೆ ಮಧ್ಯ ಪ್ರಾಚ್ಯ ಮತ್ತು ಆಸ್ಟ್ರೇಲಿಯ ದೇಶಗಳಿಗೂ ರಫ್ತು ಆಗುತ್ತಿದೆ.
ಅರುಣಾ ಮಸಾಲಾ ದಕ್ಷಿಣ ಭಾರತದ ಅಗ್ರ ಮಸಾಲೆ ತಯಾರಕರಲ್ಲಿ ಒಂದಾಗಿದೆ, ಅತ್ಯಾಧುನಿಕ ದರ್ಜೆಯ ಮಸಾಲೆ ಉತ್ಪಾದನಾ ಸೌಲಭ್ಯಗಳು, ಸಂಪೂರ್ಣ ಸ್ವಯಂಚಾಲಿತ ಯಂತ್ರಗಳು ಮತ್ತು ಆಂತರಿಕ ಅಲ್ಟ್ರಾ ಮೋಡರ್ನ್ ಪ್ರಯೋಗಾಲಯವನ್ನು ಹೊಂದಿದೆ. ಹಲವು ವರ್ಷಗಳ ಬದ್ಧತೆಯು ಇಂದು ಹಲವು ಕುಟುಂಬದ ನೆಚ್ಚಿನ ಮಸಾಲೆಯಾಗಿ ಗುರುತಿಸಿಕೊಂಡಿದೆ.