
ಮತ್ತೆ ಒಂದಾಗಲಿದ್ದಾರೆಯೇ ಈ ತಾರಾದಂಪತಿ: ಸಮಂತಾ ಕೆಲಸದಿಂದ ಅಭಿಮಾನಿಗಳಲ್ಲಿ ಮೂಡಿತು ನಿರೀಕ್ಷೆ!
Sunday, January 23, 2022
ಹೈದರಾಬಾದ್: ತಾರಾ ದಂಪತಿ ಸಮಂತಾ ಹಾಗೂ ನಾಗಚೈತನ್ಯ ಅಕ್ಟೋಬರ್ 2ರಂದು ದಿಢೀರೆಂದು ವಿಚ್ಛೇದನ ಘೋಷಣೆ ಮಾಡಿರುವುದರಿಂದ ಅವರ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿತ್ತು. ಆದ್ದರಿಂದ ಅವರು ಮತ್ತೆ ಒಂದಾಗಲಿದ್ದಾರೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ.
ಅದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಸಮಂತಾ ಮಾಡಿರುವ ಕೆಲಸವದರಿಂದ ಈ ದಂಪತಿ ಮತ್ತೆ ಒಂದಾಗಲಿದ್ದಾರೆ ಎಂಬ ಆಸೆ ಅಭಿಮಾನಿಗಳಲ್ಲಿ ಮತ್ತೆ ಚಿಗುರಿದೆ. ಸಮಂತಾ ಮಾಡಿದ ಆ ಕೆಲಸವೇನೆಂದರೆ, ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿದ್ದ ವಿಚ್ಛೇದನೆ ಘೋಷಣೆಯ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಅಚ್ಚರಿ ತಂದಿದೆ.
ಸಮಂತಾ ಈ ರೀತಿ ಯಾಕೆ ಮಾಡಿದರೂ ಎಂದು ಅಭಿಮಾನಿಗಳು ಯೋಚನೆಯಲ್ಲಿದ್ದಾರೆ. ಇಬ್ಬರು ಮತ್ತೆ ಒಂದಾಗಲಿದ್ದಾರೆಯೇ? ಸಮಂತಾ ಮತ್ತೆ ಅಕ್ಕಿನೇನಿ ಕುಟುಂಬಕ್ಕೆ ಬರಲು ಯತ್ನಿಸುತ್ತಿದ್ದಾರಾ? ಎಂಬ ಚರ್ಚೆ ಆರಂಭವಾಗಿದೆ.
ಆದರೆ, ನಾಗಚೈತನ್ಯ ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ ವಿಚ್ಛೇದನಾ ಪೋಸ್ಟ್ ಅನ್ನು ಡಿಲೀಟ್ ಮಾಡಿಲ್ಲ. ಒಂದು ವೇಳೆ ಅವರಿಬ್ಬರೂ ಒಂದಾಗುವುದಾದರೆ, ನಾಗಚೈತನ್ಯ ಖಾತೆಯಲ್ಲೂ ಪೋಸ್ಟ್ ಡಿಲೀಟ್ ಆಗಬೇಕಿತ್ತು. ಆದರೆ ನಾಗಚೈತನ್ಯ ಖಾತೆಯಲ್ಲಿ ಡಿಲೀಟ್ ಆಗದಿರುವುದು ಅಭಿಮಾನಿಗಳಿ ನಿರಾಸೆ ತಂದಿದೆ. ಇನ್ಸ್ಟಾಗ್ರಾಂನಲ್ಲಿ ಕಹಿ ನೆನಪುಗಳನ್ನು ಅಳಿಸುವ ಪ್ರಕ್ರಿಯೆಯಲ್ಲಿ ವಿಚ್ಛೇದನಾ ಪೋಸ್ಟ್ ಕೂಡ ಡಿಲೀಟ್ ಆಗಿದೆ ಎಂದು ಹೇಳಲಾಗುತ್ತಿದೆ.
ವಿಚ್ಛೇದನಕ್ಕೊಳಗಾಗಿರುವ ತಾರಾದಂಪತಿ ಸದ್ಯ ತಮ್ಮ ಗಮನವನ್ನು ಸಂಪೂರ್ಣ ಸಿನಿಮಾಗಳ ಕಡೆ ಕೇಂದ್ರೀಕರಿಸಿದ್ದಾರೆ. ನಾಗಚೈತನ್ಯ ಅಭಿನಯದ ಬಂಗಾರರಾಜು ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಬಾಕ್ಸ್ಆಫೀಸ್ನಲ್ಲಿ ಸದ್ದು ಮಾಡುತ್ತಿದೆ. ಇತ್ತ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ಸಮಂತಾ ಮೊದಲ ಬಾರಿಗೆ ಐಟಂ ಡಾನ್ಸ್ಗೆ ಸೊಂಟ ಬಳುಕಿಸಿದ್ದು, ಹಾಡು ಸಿಕ್ಕಾಪಟ್ಟೆ ಹಿಟ್ ಆಗಿದೆ.