
ಟೀ ಕುಡಿಯಲೆಂದು ಅಂಗಡಿ ಬಾಗಿಲು ಮುಚ್ಚದೆ ಹೋದ ಮಾಲಕನಿಗೆ ಕಾದಿತ್ತು ಶಾಕ್!
Monday, February 14, 2022
ದಾವಣಗೆರೆ: ಹತ್ತಿದಲ್ಲೇ ಇದ್ದ ಹೊಟೇಲ್ ಗೆ ಟೀ ಕುಡಿಯಲೆಂದು ಅಂಗಡಿ ಬಾಗಿಲು ಮುಚ್ಚದೇ ಹೊರಗಡೆ ಹೋದ ಮಾಲಕ ಈಗ ತಲೆಮೇಲೆ ಕೈಹೊತ್ತು ಕುಳಿತಿರಬೇಕಾದ ಪರಿಸ್ಥಿತಿ ಎದುರಾಗಿದೆ. ದಾವಣಗೆರೆಯಲ್ಲಿ ಈ ಒಂದು ಘಟನೆ ನಡೆದಿದೆ.
ಅಂಗಡಿ ಮಾಲಕ ಟೀ ಕುಡಿಯಲೆಂದು ಹೋಗಿದ್ದಾನೆ. ಈ ಸಂದರ್ಭ ಅಂಗಡಿಯಲ್ಲಿ ಯಾರೂ ಇಲ್ಲದಿರುವುನ್ನು ಗಮನಿಸಿರುವ ಆಗಂತುಕನೋರ್ವ ಕ್ಯಾಶ್ ಕೌಂಟರ್ನಲ್ಲಿದ್ದ 10 ಸಾವಿರ ರೂ. ಹಣ ಕದ್ದು ಪರಾರಿಯಾಗಿದ್ದಾನೆ. ಈ ಘಟನೆ ದಾವಣಗೆರೆಯ ಹದಡಿ ರಸ್ತೆಯಲ್ಲಿರುವ ಕಲ್ಲೇಶ್ವರ ಟೈಲ್ಸ್ ಶಾಪ್ನಲ್ಲಿ ನಡೆದಿದೆ. ಹಣ ಕಳುವು ಮಾಡಿರುವ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಟೀ ಕುಡಿದು ಬಂದ ಮಾಲಕ ಕ್ಯಾಶ್ ಕೌಂಟರ್ ನೋಡಿದಾಗ ಹಣ ಇಲ್ಲದಿರುವುದನ್ನು ಗಮನಿಸಿ ಶಾಕ್ ಆಗಿದ್ದಾರೆ. ತಕ್ಷಣ ಆತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಳ್ಳನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.