![ಬೆಳ್ತಂಗಡಿ ಮೂಲದ ಶಿಕ್ಷಕಿ ಬೆಂಗಳೂರಿನಲ್ಲಿ ಹೃದಯಾಘಾತಕ್ಕೆ ಬಲಿ! ಬೆಳ್ತಂಗಡಿ ಮೂಲದ ಶಿಕ್ಷಕಿ ಬೆಂಗಳೂರಿನಲ್ಲಿ ಹೃದಯಾಘಾತಕ್ಕೆ ಬಲಿ!](https://blogger.googleusercontent.com/img/b/R29vZ2xl/AVvXsEjCJIl8DRJY0SZ6oNNTVQRToQ_lNH6ynckZNnQsC0nrMyEN-ovauU_MuXCj5Lea6chO4tSC5rqAPlyUeLKspLQ5LujITJ60oHr3AXkeB_OhVjr3CRbwrgqiSiMzDwIEaJIS9obAHcOgZaOE/s1600/1655264843444248-0.png)
ಬೆಳ್ತಂಗಡಿ ಮೂಲದ ಶಿಕ್ಷಕಿ ಬೆಂಗಳೂರಿನಲ್ಲಿ ಹೃದಯಾಘಾತಕ್ಕೆ ಬಲಿ!
Wednesday, June 15, 2022
ಮಂಗಳೂರು: ದ.ಕ.ಜಿಲ್ಲೆಯ ಬೆಳ್ತಂಗಡಿ ಮೂಲದ ಶಿಕ್ಷಿಕಿಯೋರ್ವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಕಳೆಂಜ ಗ್ರಾಮದ ಉದ್ರಾಜೆ ನಿವಾಸಿ, ಮೇಲಂತಬೆಟ್ಟು ಕಾಲೇಜಿನ ಉಪನ್ಯಾಸಕ ಡಾ.ಕುಶಾಲಪ್ಪ ಎಸ್. ಅವರ ಪತ್ನಿ ಭಾರತಿ ಎಸ್.(42) ಮೃತಪಟ್ಟ ದುರ್ದೈವಿ.
ಮೃತಪಟ್ಟ ಭಾರತಿ ಎಸ್. ಅವರು ಬೆಳ್ತಂಗಡಿಯ ಕಾಯರ್ತಡ್ಕದ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸಂದರ್ಶನವೊಂದರಲ್ಲಿ ಭಾಗವಹಿಸಲು ಅವರು ಬೆಂಗಳೂರಿಗೆ ತೆರಳಿದ್ದರು. ಆದರೆ ಅಲ್ಲಿ ಭಾರತಿ ಎಸ್. ಅವರು ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು. ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.