![ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ಶುಕ್ರವಾರದಂದು ಈ ಕೆಲಸಗಳನ್ನು ತಪ್ಪದೇ ಮಾಡಿ! ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ಶುಕ್ರವಾರದಂದು ಈ ಕೆಲಸಗಳನ್ನು ತಪ್ಪದೇ ಮಾಡಿ!](https://blogger.googleusercontent.com/img/b/R29vZ2xl/AVvXsEiGA5e9C8hjr2VMfpCr-XrRLNuMHz1gvqodahVlUcBatcuDrq7FS03tQqgwN2tzZCegazcCsA4W-Fk-19nLlW7IIWBO5F14pa0BqXmXrim5M4Szh-4OIuH-7JOPU_XDSsTiTDt1VuPvyM8v/s1600/1676737260848876-0.png)
ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ಶುಕ್ರವಾರದಂದು ಈ ಕೆಲಸಗಳನ್ನು ತಪ್ಪದೇ ಮಾಡಿ!
Saturday, February 18, 2023
ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಪಡೆಯಲು ಮತ್ತು ಪ್ರಗತಿ ಸಾಧಿಸಲು ಶುಕ್ರವಾರದಂದು ಲಕ್ಷ್ಮಿದೇವಿಗೆ ಕಮಲದ ಹೂ ಅರ್ಪಿಸಬೇಕೆಂದು ಹೇಳಲಾಗುತ್ತದೆ. ಕಮಲ ಅಥವಾ ಗುಲಾಬಿ ಹೂವು ಸಂಪತ್ತಿನ ದೇವತೆಗೆ ತುಂಬಾ ಪ್ರಿಯವಾಗಿದೆ. ಕಮಲದ ಹೂವಿನಲ್ಲಿ ಲಕ್ಷ್ಮಿದೇವಿಯೇ ನೆಲೆಸಿದ್ದಾಳೆಂದು ನಂಬಲಾಗಿದೆ.
ಲಕ್ಷ್ಮಿದೇವಿಯನ್ನು ಮೆಚ್ಚಿಸಲು ಕೆಲವರು ಶುಕ್ರವಾರ ಉಪವಾಸ ಆಚರಿಸುತ್ತಾರೆಂದು ನಂಬಲಾಗಿದೆ. ಈ ದಿನ ತಾಯಿಗೆ ಖೀರ್ ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ತಾಯಿಗೆ ಪ್ರಸಾದ ಅರ್ಪಿಸಿದ ನಂತರ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಿಗೆ ಅದನ್ನು ಹಂಚಬೇಕು. ಈ ಪರಿಹಾರ ಮಾಡುವುದರಿಂದ ಯಾವುದೇ ವ್ಯಕ್ತಿಯು ಸಾಲದಿಂದ ಮುಕ್ತನಾಗುತ್ತಾನೆ.
ಶುಕ್ರವಾರದಂದು ತಾಯಿ ಲಕ್ಷ್ಮಿದೇವಿಯನ್ನು ಪೂಜಿಸಿದ ನಂತರ ಅದೃಷ್ಟ ಮತ್ತು ಆರೋಗ್ಯಕ್ಕಾಗಿ ಸುಹಾಗ್ನ ಪದಾರ್ಥಗಳನ್ನು ಅರ್ಪಿಸುವುದು ಶುಭ ಫಲಿತಾಂಶ ನೀಡುತ್ತದೆ. ವಿವಾಹಿತ ಮಹಿಳೆಯರಿಗೆ ಈ ವಸ್ತುಗಳನ್ನು ನೀಡುವುದರಿಂದ ತಾಯಿ ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಶೀಘ್ರದಲ್ಲೇ ಈಡೇರಿಸುತ್ತಾಳಂತೆ.