![ಟಿಕೆಟ್ ವಿಳಂಬ, ಹೊಸಬರಿಗೆ ಮಣೆ- ಬಿಜೆಪಿ ಸೋಲಿಗೆ ಕಾರಣ: ಬೊಮ್ಮಾಯಿ ಆತ್ಮಾವಲೋಕನ ಟಿಕೆಟ್ ವಿಳಂಬ, ಹೊಸಬರಿಗೆ ಮಣೆ- ಬಿಜೆಪಿ ಸೋಲಿಗೆ ಕಾರಣ: ಬೊಮ್ಮಾಯಿ ಆತ್ಮಾವಲೋಕನ](https://i.ytimg.com/vi/UxwSspzvaSY/hqdefault.jpg)
ಟಿಕೆಟ್ ವಿಳಂಬ, ಹೊಸಬರಿಗೆ ಮಣೆ- ಬಿಜೆಪಿ ಸೋಲಿಗೆ ಕಾರಣ: ಬೊಮ್ಮಾಯಿ ಆತ್ಮಾವಲೋಕನ
ಟಿಕೆಟ್ ವಿಳಂಬ, ಹೊಸಬರಿಗೆ ಮಣೆ- ಬಿಜೆಪಿ ಸೋಲಿಗೆ ಕಾರಣ: ಬೊಮ್ಮಾಯಿ ಆತ್ಮಾವಲೋಕನ
ಟಿಕೆಟ್ ಘೋಷಣೆಯಲ್ಲಿ ವಿಳಂಬ ಮತ್ತು ಹೊಸಬರಿಗೆ ಟಿಕೆಟ್ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಆತ್ಮಾವಲೋಕನ ಮಾಡಿಕೊಂಡಿದ್ಧಾರೆ.
ಬಿಜೆಪಿ ಶಾಸಕರು, ಸೋತಿರುವ ಅಭ್ಯರ್ಥಿಗಳು ಮತ್ತು ಬಿಜೆಪಿ ನಾಯಕರ ಜೊತೆಗೆ ಸೋಲಿನ ಪರಾಮರ್ಶೆ ನಡೆಸಿದ ಬಳಿಕ ಅವರು ಮಾಧ್ಯಮಕ್ಕೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವು ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಸ್ಥಳೀಯ ಅಂಶಗಳು ಕಾರಣವಾಗಿವೆ. ಆದರೆ, ಇಡೀ ರಾಜ್ಯದಲ್ಲಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಸೋಲಿನ ಸಂಪೂರ್ಣ ಹೊಣೆಯನ್ನು ನಾನೇ ತೆಗೆದುಕೊಳ್ಳುತ್ತೇನೆ ಎಂದು ಬೊಮ್ಮಾಯಿ ಅವರು ಹೇಳಿದರು.
ಜನತೆ ನಮ್ಮನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ. ನಾವು ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂದು ಅವರು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು.
ಇದೇ ವೇಳೆ, ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭವಾಗಿದೆ ಎಂದು ಹೇಳಿದ ಅವರು, ಮುಂದಿನ ದಿನಗಳಲ್ಲಿ ಜನ ನಮಗೆ ಮನ್ನಣೆ ನೀಡಲಿದ್ದಾರೆ ಎಂದು ಆಶಾವಾದ ವ್ಯಕ್ತಪಡಿಸಿದರು.