-->
ಮಂಗಳೂರು: ಕರಿಮಣಿ ಕಳವು ಪ್ರಕರಣ - 23 ವರ್ಷದ ಬಳಿಕ ಆರೋಪಿ ಬಂಧನ

ಮಂಗಳೂರು: ಕರಿಮಣಿ ಕಳವು ಪ್ರಕರಣ - 23 ವರ್ಷದ ಬಳಿಕ ಆರೋಪಿ ಬಂಧನ


 ಮಂಗಳೂರು: ಮಹಿಳೆಯೊಬ್ಬರ ಕರಿಮಣಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
 
 2000  ನೇ ಇಸವಿ ಡಿಸೆಂಬರ್ 17ರಂದು  ರಾತ್ರಿ  8:45  ಗಂಟೆಗೆ  ಮಹಿಳೆಯನ್ನು ಅಡ್ಡಗಟ್ಟಿ ಆರೋಪಿಗಳು ಚೂರಿ  ತೋರಿಸಿ  ಕುತ್ತಿಗೆಯಲ್ಲಿದ್ದ  ಕರಿಮಣಿ  ಸರವನ್ನು ಕಸಿದು  ಸುಲಿಗೆ ಮಾಡಿಗಿದ್ದರು. ಈ  ಪ್ರಕರಣಕ್ಕೆ  ಸಂಬಂದಿಸಿದಂತೆ  ಉರ್ವಾ   ಪೊಲೀಸ್  ಠಾಣೆಯಲ್ಲಿ  ಠಾಣೆಯಲ್ಲಿ  ಪ್ರಕರಣ  ದಾಖಲಾಗಿತ್ತು.

          ಈ  ಪ್ರಕರಣದಲ್ಲಿ  ಹುಸೇನ್  ಯಾನೆ  ಮೊಹಮ್ಮದ್  ಹುಸೇನ್,   ಬಶೀರ್  ಮತ್ತು  ಮೊಯ್ದೀನ್  ಕುದ್ರೋಳಿ  ಎಂಬವರುಗಳಿದ್ದು  ಹುಸೇನ್  ಯಾನೆ  ಮೊಹಮ್ಮದ್  ಹುಸೇನ್  ಮತ್ತು ಮೊಯ್ದೀನ್  ಕುದ್ರೋಳಿ   ಎಂಬವರನ್ನು  ಆ ಸಂದರ್ಭದಲ್ಲಿ ಬ ಬಂಧಿಸಲಾಗಿತ್ತು  . ಆದರೆ ಆರೋಪಿ  ಬಶೀರ್   ಎಂಬಾತನು  ತಲೆ  ಮರೆಸಿಕೊಂಡಿದ್ದನು.  
          
ಈತನ  ವಿರುದ್ದ  ನ್ಯಾಯಾಲಯವು  ಉದ್ಘೋಷಣೆಯನ್ನು  ಹೊರಡಿಸಿತ್ತು.  ಆದರೆ ಆರೋಪಿಯು  ನ್ಯಾಯಾಲಯಕ್ಕೂ  ಹಾಜರಾಗದೇ  ತಲೆಮರೆಸಿಕೊಂಡಿದ್ದನು.    ಆರೋಪಿಯನ್ನು ಜು.26 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Ads on article

Advertise in articles 1

advertising articles 2

Advertise under the article