-->
ಆಳ್ವಾಸ್ ಮೂಡಬಿದಿರೆಯಲ್ಲಿ ಆನಂದ್ ಆಳ್ವರ 106ನೇ ಹುಟ್ಟುಹಬ್ಬದ ಸಂಭ್ರಮ

ಆಳ್ವಾಸ್ ಮೂಡಬಿದಿರೆಯಲ್ಲಿ ಆನಂದ್ ಆಳ್ವರ 106ನೇ ಹುಟ್ಟುಹಬ್ಬದ ಸಂಭ್ರಮ

ಆಳ್ವಾಸ್ ಮೂಡಬಿದಿರೆಯಲ್ಲಿ ಆನಂದ್ ಆಳ್ವರ 106ನೇ ಹುಟ್ಟುಹಬ್ಬದ ಸಂಭ್ರಮ








ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಅವರ ತಂದೆಯವರಾದ ಮಿಜಾರುಗುತ್ತು ಆನಂದ ಆಳ್ವ ಅವರ 106ನೇ ಹುಟ್ಟುಹಬ್ಬವನ್ನು ಇಲ್ಲಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು.


ಆನಂದ ಆಳ್ವ ಅವರಿಗೆ ಬೆಳ್ಳಿ ಲೋಟದಲ್ಲಿ ಹಾಲು ನೀಡಿ, ಹೂವಿನ ಹಾರ, ಪನ್ನೀರು, ಹೂವಿನ ದಳ ಹಾಗೂ ತಿಲಕದ ಗೌರವ ನೀಡಿ ಆರತಿ ಬೆಳಗಿ ನೂರ ಆರು ದೀಪ ಹಚ್ಚಿ ಹುಟ್ಟು ಹಬ್ಬವನ್ನು ಸಾರ್ಥಕವಾಗಿ ಅಚರಿಸಲಾಯಿತು.


ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಅವರ ನೇತೃತ್ವದಲ್ಲಿ ಸಂಭ್ರಮದಿಂದ ಹುಟ್ಟು ಹಬ್ಬದ ಆಚರಣೆ ನಡೆಯಿತು.



ಕೇವಲ ಬದುಕಿದರೆ ಸಾಲದು.. ಆ ಬದುಕು ಸಾರ್ಥಕವಾಗಿರಬೇಕು. ಅದಕ್ಕೆ ತಂದೆ ಆನಂದ ಆಳ್ವ ಅವರ ಬದುಕು ನಿದರ್ಶನ. ಅವರ ಹೋರಾಟ, ಜೀವನ ಕ್ರಮ ನಮಗೆಲ್ಲ ಸ್ಫೂರ್ತಿ ಎಂದು ಡಾ. ಮೋಹನ ಆಳ್ವ ಹೇಳಿದರು.


ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಮಕ್ಕಳು ತಂದೆ-ತಾಯಿ ಹುಟ್ಟು ಹಬ್ಬ ಆಚರಿಸುವುದು ಯೋಗ ಹಾಗೂ ಭಾಗ್ಯ ಎಂದು ಶ್ಲಾಘಿಸಿದರು.


ತಂದೆ-ತಾಯಿಯ ಸಮಾಜ ಸೇವೆಯೇ ಮಕ್ಕಳಿಗೆ ಆಸ್ತಿ. ಡಾ. ಮೋಹನ ಆಳ್ವ ಅವರ ಸಾಧನೆ ಹಿಂದೆ ಅವರು ತಂದೆ-ತಾಯಿಯ ತ್ಯಾಗ ಇದೆ ಎಂದು ಹೇಳಿದ ಅವರು, ದೇವರನ್ನು ಪೂಜಿಸದಿದ್ದರೂ ಪೋಷಕರ ಪಾಲನೆ ಮಾಡಿ. ಹಿರಿಯರು ಮಕ್ಕಳ ಆಶ್ರಯದಲ್ಲಿ ಇರಬೇಕು. ಆಶ್ರಮದಲ್ಲಿ ಅಲ್ಲ ಎಂದು ಹಿತವಚನ ಹೇಳಿದರು.


ಮಾಜಿ ಸಚಿವ ಅಭಯ ಚಂದ್ರ ಜೈನ್ ಮಾತನಾಡಿ, ಆನಂದ ಆಳ್ವ ಆಯೋಜಿಸಿದ್ದ ಕಂಬಳಕ್ಕೆ ಆಗಿನ ಮುಖ್ಯಮಂತ್ರಿ ಗುಂಡೂರಾಯರು ಆಗಮಿಸಿದ್ದರು. ಅಡಿಕೆ ತೋಟದ ಮೂಲಕ ಕೃಷಿಕರು ಬದುಕು ಕಟ್ಟಿಕೊಂಡಿದ್ದರೆ ಅದಕ್ಕೆ ಆನಂದ ಆಳ್ವರು ಕಾರಣ ಎಂದು ಪ್ರಶಂಸಿಸಿದರು.


ನಿಟ್ಟೆಯ ಡಾ. ವಿನಯ್ ಹೆಗ್ಡೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಡಾ. ವಿನಯ್ ಆಳ್ವ ಹಾಗೂ ಆನಂದ ಆಳ್ವ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ತುಂಬು ಕುಟುಂಬ ಸಂಭ್ರಮದಲ್ಲಿ ಭಾಗಿಯಾದರು.


Ads on article

Advertise in articles 1

advertising articles 2

Advertise under the article