-->
ಅಕ್ರಮ ಸಂಬಂಧ ಇಟ್ಕೊಂಡಿದ್ದ ಸ್ನೇಹಿತನ ಪತ್ನಿಯನ್ನೇ ಹತ್ಯೆಗೈದ ಕಿರಾತಕ: ಎಣ್ಣೆಪಾರ್ಟಿಗೆಂದು ಬಂದು ಮಿತ್ರದೋಹ

ಅಕ್ರಮ ಸಂಬಂಧ ಇಟ್ಕೊಂಡಿದ್ದ ಸ್ನೇಹಿತನ ಪತ್ನಿಯನ್ನೇ ಹತ್ಯೆಗೈದ ಕಿರಾತಕ: ಎಣ್ಣೆಪಾರ್ಟಿಗೆಂದು ಬಂದು ಮಿತ್ರದೋಹ

ಚೆನ್ನೈ: ಸ್ನೇಹಿತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಟ್ಕೊಂಡ ಕಿರಾತಕನೋರ್ವನು ಆಕೆಯನ್ನು ಆಕೆಯ ಪುತ್ರಿಯ ಮುಂದೆಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಮರಿಮಲೈ ನಗರದಲ್ಲಿ ಮಂಗಳವಾರ ನಡೆದಿದೆ. ಕೃತ್ಯ ಎಸಗಿದ ಬಳಿಕ ಆರೋಪಿ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಮರಿಮಲೈ ನಗರದ ರಾಜೀವ್​ಗಾಂಧಿ ನಗರದ ನಿವಾಸಿ ಧರಣಿ (21) ಮೃತಪಟ್ಟ ದುರ್ದೈವಿ. ಈಕೆ ಪತಿ ಇಲೆಕ್ಟ್ರಿಷಿಯನ್​ ಆಗಿರುವ ಸುಂದರ್​. ದಂಪತಿಗೆ ಇಬ್ಬರು ಮಕ್ಕಳಿದ್ದರು.

ಸುಂದರನ ಸ್ನೇಹಿತ ಸುಡಾನ್​ (30) ಆಗಾಗ ಇವರ ಮನೆಗೆ ಬರುತ್ತಿದ್ದ. ಇಬ್ಬರು ಸೇರಿ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಹೀಗೆ ಬರುತ್ತಿದ್ದ ಸುಡಾನ್​ ಗೆ ಸ್ನೇಹಿತ ಸುಂದರನ ಪತ್ನಿ ಸ್ನೇಹವಾಗಿದೆ. ಧರಣಿಗೂ ಈತ ಮೇಲೆ ಸ್ನೇಹವಾಗಿದೆ. ಇಬ್ಬರ ನಡುವಿನ ಈ ಸ್ನೇಹ ಅಕ್ರಮ ಸಂಬಂಧಕ್ಕೆ ತಿರುಗಿದೆ. ಇಬ್ಬರು ಸುಂದರ್​ಗೆ ತಿಳಿಯದಂತೆ ರಹಸ್ಯ ಸಂಬಂಧವನ್ನು ಇಟ್ಟುಕೊಂಡಿದ್ದರು.

ಕೆಲವು ತಿಂಗಳುಗಳ ಹಿಂದೆ ಸುಂದರ್​ಗೆ ಈ ವಿಚಾರ ತಿಳಿದು ಇಬ್ಬರಿಗೂ ಎಚ್ಚರಿಕೆ ನೀಡಿದ್ದಾನೆ. ಇದಾದ ಬಳಿಕ ಧರಣಿ ಸುಡಾನ್​ ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಾಳೆ. ಆದರೆ ಈ ನಡುವೆ ಧರಣಿಗೆ ಬೇರೊಬ್ಬನೊಂದಿಗೆ ಸಂಬಂಧ ಇರುವುದು ಸುಡಾನ್​ಗೆ ತಿಳಿದಿದೆ. ಸುಡಾನ್​ ಈ ಬಗ್ಗೆ ಧರಣಿಯನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ

ಆದರೆ, ಮರುದಿನ ಬೆಳಗ್ಗೆ ಅಂದರೆ ಮಂಗಳವಾರ ಸುಂದರ್​, ಕೆಲಸಕ್ಕೆ ತೆರಳಿದ್ದಾನೆ. ಈ ವೇಳೆ ಆತನ ಮನೆಗೆ ತೆರಳಿದ ಸುಡಾನ್​, ಎರಡು ವರ್ಷದ ಪುತ್ರಿಯ ಎದುರಲ್ಲೇ ಚಾಕುವಿನಿಂದ ಧರಣಿಯ ಮೇಲೆ ದಾಳಿ ಮಾಡಿದ್ದಾನೆ. ಆಕೆ ಮೃತಪಟ್ಟಿರುವುದು ಖಚಿತವಾದ ಬಳಿಕ ಚಾಕು ಸಮೇತ ಮರಿಮಲೈ ನಗರ ಪೊಲೀಸ್​ ಠಾಣೆಗೆ ತೆರಳಿ ಪೊಲೀಸರ ಮುಂದೆ ಸುಡಾನ್​ ಶರಣಾಗಿದ್ದಾನೆ.

ಇದಾದ ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಧರಣಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚೆಂಗಲ್ಪಟು ಜನರಲ್​ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣವನ್ನು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

Ads on article

Advertise in articles 1

advertising articles 2

Advertise under the article