-->
RSS ಕಚೇರಿ ಬಳಿ ಮೂತ್ರ ವಿಸರ್ಜನೆ- ಮೂವರ ಬಂಧನ

RSS ಕಚೇರಿ ಬಳಿ ಮೂತ್ರ ವಿಸರ್ಜನೆ- ಮೂವರ ಬಂಧನ



ಲಖನೌ: ಉತ್ತರ ಪ್ರದೇಶದ ಶಹಜಹಾನ್ ಪುರದ RSS ಕಚೇರಿ ದ್ವಾರದ ಬಳಿ ಮೂತ್ರ ವಿಸರ್ಜನೆ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

 ಶಶಾಂಕ್ ಗುಪ್ತಾ, ಶಿವಾಂಕ್ ಗುಪ್ತಾ, ಮುಖೇಶ್ ಗುಪ್ತಾ ಬಂಧಿತರು.
 
ಬುಧವಾರ ರಾತ್ರಿ ಮೂರ್ನಾಲ್ಕು  ಮಂದಿಯಿದ್ದ ಗುಂಪು RSS ಕಚೇರಿಯ ದ್ವಾರ ಬಳಿ ಮೂತ್ರ ವಿಸರ್ಜನೆ ಮಾಡಿದೆ. ಪ್ರಶ್ನೆ ಮಾಡಿದ ಕಚೇರಿ ಸಿಬ್ಬಂದಿ ಮೇಲೆ ತಿರುಗಿಬಿದ್ದ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಆರೋಪಿಗಳು ಹಾಗೂ RSS ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದೆ. ಸ್ಥಳದಲ್ಲಿ ಜಮಾಯಿಸಿದ
50ಕ್ಕೂ ಹೆಚ್ಚು ಜನರು ಕಲ್ಲು ತೂರಾಟ ನಡೆಸಿದ್ದಾರೆ. ಗುಂಡು ಹಾರಿಸಿದಂಥ ಘಟನೆಗಳೂ ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

ಘಟನೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,  ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307 ಸೇರಿ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ತಲೆ ಮರೆಸಿಕೊಂಡಿರುವ ಇತರೆ ಆರೋಪಿಗಳ ಬಂಧನಕ್ಕೆ ನಾಲ್ಕು ತಂಡಗಳನ್ನು ರಚಿಸಲಾಗಿದೆ,'' ಎಂದು ಶಹಜಾನ್‌ಪುರ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article