-->
ಪುತ್ತೂರು: ವಿದ್ಯುತ್ ಸ್ಪರ್ಶವಾಗಿ ಗುತ್ತಿಗೆ ಕಾರ್ಮಿಕ ಮೃತ್ಯು

ಪುತ್ತೂರು: ವಿದ್ಯುತ್ ಸ್ಪರ್ಶವಾಗಿ ಗುತ್ತಿಗೆ ಕಾರ್ಮಿಕ ಮೃತ್ಯು


ಪುತ್ತೂರು: ವಿದ್ಯುತ್ ಸ್ಪರ್ಶವಾಗಿ ಗುತ್ತಿಗೆ ಕಾರ್ಮಿಕ ಮೃತಪಟ್ಟ ಘಟನೆ ದ.ಕ. ಜಿಲ್ಲೆಯ ಕಡಬ ತಾಲೂಕಿನ ಪಂಜದಲ್ಲಿ ನಡೆದಿದೆ.

ಬೆಳ್ತಂಗಡಿಯ ಮೊಗ್ರು ಸಮೀಪದ ನಡುಎರ್ಮಲ್ ನ ಪ್ರಕಾಶ್(29) ಮೃತಪಟ್ಟ ಯುವಕ.

ಪ್ರಕಾಶ್ ಅವರು ಪಂಜದ ಅಲೆಕ್ಕಾಡಿ ಸಮೀಪದ ಪಿಜಾವ್ ನಲ್ಲಿ ವಿದ್ಯುತ್ ಕಂಬ ಏರಿ ಕೆಲಸ ನಿರ್ವಹಿಸುತ್ತಿದ್ದರು. ವಿದ್ಯುತ್ ಸರಿಪಡಿಸುತ್ತಿದ್ದ ವೇಳೆ ಪ್ರಕಾಶ್‌ಗೆ ವಿದ್ಯುತ್ ಶಾಕ್‌ಗೊಳಗಾಗಿ ಮೃತಪಟ್ಟಿದ್ದಾರೆ‌. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article