-->
ಜು. 14: ಮಂಗಳೂರು ತ್ರಿಯಾತ್ಲಾನ್‌, ಬೀಚ್‌ ಫೆಸ್ಟಿವಲ್‌ ಉದ್ಘಾಟನೆ

ಜು. 14: ಮಂಗಳೂರು ತ್ರಿಯಾತ್ಲಾನ್‌, ಬೀಚ್‌ ಫೆಸ್ಟಿವಲ್‌ ಉದ್ಘಾಟನೆ


ಮಂಗಳೂರು: ನಗರದ ತಪಸ್ಯ ಫೌಂಡೇಶನ್‌ ವತಿಯಿಂದ ಜು. 14ರಂದು ಸಂಜೆ 6.30ರಿಂದ ಟಿಎಂಎ ಪೈ ಸ್ಟಾರ್‌ ಕಾನ್ಫರೆನ್ಸ್ ಹಾಲ್‌ನಲ್ಲಿ ಮಂಗಳೂರು ತ್ರಿಯಾತ್ಲಾನ್‌, ಬೀಚ್‌ ಫೆಸ್ಟಿವಲ್‌ ಉದ್ಘಾಟನೆ ಕಾರ್ಯಕ್ರಮ ಜರಗಲಿದೆ.

ಮುಖ್ಯ ಅತಿಥಿಗಳಾಗಿ  ಸ್ಪೀಕರ್‌ ಯು.ಟಿ. ಖಾದರ್‌, ಸಂಸದ ಕ್ಯಾ। ಬ್ರಿಜೇಶ್‌ ಚೌಟ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ಐಡಿಎಫ್‌ಸಿ ಬ್ಯಾಂಕಿನ ಮುಖ್ಯ ಮಾರುಕಟ್ಟೆ ಅಧಿಕಾರಿ ನಾರಾಯಣನ್‌ ಟಿ.ವಿ., ರಾಜ್ಯ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್‌.ಕೆ. ಪಾಟೀಲ್‌, ಎನ್‌ಐಟಿಕೆ ನಿರ್ದೇಶಕ ರವಿ ಬಿ. ಅವರು  ಭಾಗವಹಿಸುವರು.

ಗೌರವ ಅತಿಥಿಗಳಾಗಿ ಎಂಆರ್‌ಪಿಎಲ್‌ ಜಿಜಿಎಂ ಕೃಷ್ಣ ಹೆಗ್ಡೆ, ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿ ಸೋಜಾ, ಮಂಜುನಾಥ ಭಂಡಾರಿ, ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌, ಎಸ್‌ಪಿ ಯತೀಶ್ ಎನ್ IPS , ಇಂಡಿಯನ್‌ ತ್ರಿಯಾತ್ಲಾನ್‌ ಡೆವಲಪ್‌ಮೆಂಟ್‌ ಅಧಿಕಾರಿ ಹರೀಶ್‌ ಪ್ರಸಾದ್‌, ಶಾಸಕರಾದ ವೇದವ್ಯಾಸ ಕಾಮತ್‌, ಡಾ। ವೈ ಭರತ್‌ ಶೆಟ್ಟಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಕರ್ನಾಟಕ ಸ್ಟೇಟ್‌ ರೆಸ್ಲಿಂಗ್‌ ಫೆಡರೇಶನ್‌ನ ಅಧ್ಯಕ್ಷ ಬಿ. ಗುಣರಂಜನ್‌ ಶೆಟ್ಟಿ, ಲಯನ್‌್ಸ ಗವರ್ನರ್‌ ಭಾರತಿ ಬಿ.ಎಂ., ಲ। ಅರವಿಂದ ಶೆಣೈ ಕುಡ್ಪಿ, ಲ। ವಸಂತ್‌ ಕೆ. ಶೆಟ್ಟಿ, ಪಾಲಿಕೆ ಕಮಿಷನರ್‌ ಆನಂದ್‌ ಸಿ.ಎಲ್‌., ಯೇನಪೋಯ  ವಿವಿಯ ವೈಸ್‌ ಚಾನ್ಸೆಲರ್‌ ಡಾ। ವಿಜಯ ಕುಮಾರ್‌ ಅವರು ಭಾಗವಹಿಸುವರು ಎಂದು  ಪ್ರಕಟನೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article