-->
ಮಂಗಳೂರು: ಸಂಘಟಕ, ಸಿವಿಲ್ ಕಾಂಟ್ಯಾಕ್ಟರ್ ದಾಮೋದರ ನಿಸರ್ಗ ನಿಧನ

ಮಂಗಳೂರು: ಸಂಘಟಕ, ಸಿವಿಲ್ ಕಾಂಟ್ಯಾಕ್ಟರ್ ದಾಮೋದರ ನಿಸರ್ಗ ನಿಧನ

ಮಂಗಳೂರು: ಸಂಘಟನಾ ಕ್ಷೇತ್ರದ ದಿಗ್ಗಜರೆಂದೇ ಖ್ಯಾತರಾದ ಸಿವಿಲ್ ಕಾಂಟ್ಯಾಕ್ಟರ್ ಬಿ.ದಾಮೋದರ ನಿಸರ್ಗ ಅವರು ಬಿ.ದಾಮೋದರ ನಿಸರ್ಗ ಇವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಬಿ.ದಾಮೋದರ ನಿಸರ್ಗರವರು ಅವಿಭಜಿತ ದ.ಕ.ಜಿಲ್ಲೆಯಲ್ಲಿ ತುಳು, ಕನ್ನಡ ಸಾಹಿತ್ಯ ಸಂಘಟನೆಗಳನ್ನು ನಡೆಸಿ ಅದೆಷ್ಟೋ ಸಮ್ಮೇಳನಗಳನ್ನು ಸಂಯೋಜಿಸಿದವರು. ಸಂಘಟನಾ ಕ್ಷೇತ್ರದ ದಿಗ್ಗಜರಾಗಿ, ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಸಂಚಲನ ಮೂಡಿಸಿದವರು. ಹೆಸರಾಂತ ಕಾದಂಬರಿಗಾರ, ಸಿನಿಮಾ ನಿರ್ದೇಶಕ ದಿ.ವಿಶುಕುಮಾರ್‌ರವರ ಸಹೋದರರಾದ ದಾಮೋದರ ನಿಸರ್ಗ ಸಾಹಿತ್ಯ ಸಂಘಟನೆಯ ಪ್ರವೃತ್ತಿಯೊಂದಿಗೆ ಸಿವಿಲ್ ಕಾಂಟ್ರಾಕ್ಟರ್ ಆಗಿಯೂ ಗುರುತಿಸಿದ್ದರು. 

ಬಿ.ದಾಮೋದರ ನಿಸರ್ಗರವರ ಅಂತ್ಯ ಸಂಸ್ಕಾರ ನಾಳೆ  ಬೆಳಗ್ಗೆ 11ಗಂಟೆಗೆ ನಡೆಯಲಿದೆ. ಮರೋಳಿಯಲ್ಲಿರುವ ಅವರ ಸ್ವಗೃಹ ನಿಸರ್ಗದಿಂದ ಮೆರವಣಿಗೆಯಲ್ಲಿ ಬಂದು ಪಾರ್ಥಿವ ಶರೀರವನ್ನು ಕಂಕನಾಡಿ ಗರಡಿಯ ಮುಂಭಾಗದಲ್ಲಿ 11.30ರಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಮೃತರು ಪತ್ನಿ ಹೇಮಾ ನಿಸರ್ಗ, ಪುತ್ರಿ, ಪುತ್ರ ಹಾಗೂ ಅಳಿಯನನ್ನು ಅಗಲಿದ್ದಾರೆ.

Ads on article

Advertise in articles 1

advertising articles 2

Advertise under the article