-->
ನಾಗರ ಪಂಚಮಿ ಹಬ್ಬ ಆಚರಣೆ ಬಗ್ಗೆ ನಿಮಗೆಷ್ಟು ಗೊತ್ತು

ನಾಗರ ಪಂಚಮಿ ಹಬ್ಬ ಆಚರಣೆ ಬಗ್ಗೆ ನಿಮಗೆಷ್ಟು ಗೊತ್ತು

ಹಿಂದೂ ಪುರಾಣದಲ್ಲಿ ಹತ್ತು ಹಲವು ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ  .ಹಬ್ಬಗಳು  ಶ್ರಾವಣ ಮಾಸದ ಶುಕ್ಲ ಪಂಚಮಿಯಂದು ಮಾಸದಲ್ಲಿ ಎಲ್ಲ ಹಬ್ಬಗಳಿಗೆ ಮುಂಚೂಣಿಯಂತೆ ಬರುವ  ಹಬ್ಬವೇ ನಾಗರ ಪಂಚಮಿ.
ನಾಗರ ಪಂಚಮಿ ಹಬ್ಬ ಆದಮೇಲೆ ಗಣೇಶ ಚತುರ್ಥಿ,  ಕೃಷ್ಣಾಷ್ಟಮಿ, ನವರಾತ್ರಿ, ಹೀಗೆ ನಾನಾ  ಹಬ್ಬಗಳು ಸಾಲು ಸಾಲಗಿ
ಬರುತ್ತದೆ.
ಇತಿಹಾಸ
ನಾಗರ ಪಂಚಮಿ ಆಚರಣೆಗೆ ಸಂಬಂಧ ಪಟ್ಟ ಹಾಗೆ ಹಲವು ಪುರಾಣ ಪ್ರಸಿದ್ದ ಕಥೆಗಳ ಜೊತೆ ಜಾನಪದ ಕತೆಗಳು ಸಹಯಿವೆ.
ಸ್ಕಂದ ಪುರಾಣದಲ್ಲಿ ಉಲ್ಲೇಖಿಸದಂತೆ ಹಿಂದೆ ದೇವಶರ್ಮ ಎಂಬ ಬ್ರಾಹ್ಮಣನಿಗೆ 8 ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳಿದ್ದಳು. ಒಂದು ದಿನ ಗರುಡನಿಂದ ಹೆದರಿ ಓಡಿ ಬಂದ ನಾಗರಹಾವು ಯೊಂದು ಈ ಕನ್ನಿಕೆಯ ಬಳಿ ಬಂದು ಆಶ್ರಯವನ್ನು ಕೇಳುತ್ತದೆ. ಆಗ ಕನ್ನಿಕೆ ಮನಸ್ಪೂರ್ತಿಯಾಗಿ ಒಪ್ಪಿ  ನಾಗನಿಗೆ ಹಾಲು, ಫಲಗಳನ್ನು ಇಟ್ಟು ಭಕ್ತಿಯಿಂದ ಸಾಕುತ್ತಾಳೆ. ಇದಕ್ಕೆ ಪ್ರತಿಯಾಗಿ ಆ ನಾಗವು ದಿನಂಪ್ರತಿ ಆಕೆಗೆ ಒಂದು ತೊಲೆ ಚಿನ್ನವನ್ನು ನೀಡುತ್ತಿರುತ್ತದೆ. ಹೀಗಿರಲು ಒಂದು ದಿನ ಎಂಟು ಗಂಡು ಮಕ್ಕಳಲ್ಲಿ ಒಬ್ಬನು ತುಂಬಾ ಬಂಗಾರ ಬೇಕೆಂದು ನಾಗನನ್ನು ಪೀಡಿಸಿ, ಕಾಲಿನಿಂದ ಒದೆಯುತ್ತಾನೆ. ಕೋಪಗೊಂಡ ನಾಗರ ಹಾವು ಅವನ್ನು ಸೇರಿದಂತೆ ಇತರ ಏಳು ಜನರನ್ನು ಕೊಂದು ಹೊರಟು ಹೋಗುತ್ತದೆ. ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣನಾದೇ ಎಂದು ಆ ಕನ್ನಿಕೆ, ದೇವರ ಇದಿರಿನಲ್ಲಿ ಶಿರಚ್ಛೇದನಕ್ಕೆ ಮುಂದಾದಾಗ, ನಾರಾಯಣನು ವಾಸುಕಿಗೆ ಆ ಸತ್ತ ಹುಡುಗರನ್ನು ಬದುಕಿಸಲು ಹೇಳುತ್ತಾನೆ. ಈ ರೀತಿ ಪುನಃ ಅಣ್ಣಂದಿರ ಜೀವವನ್ನು ಮರಳಿ ಪಡೆದುಕೊಳ್ಳುವಲ್ಲಿ ಆ ಕನ್ನಿಕೆ ಯಶಸ್ವಿಯಾದ ದಿನವೇ ನಾಗರ ಪಂಚಮಿ ಎಂದು ಆಚರಿಸಲಾಗುತ್ತದೆ.
ನಾಗರ ಪಂಚಮಿ ಹಬ್ಬ  ಹೆಣ್ಣು ಮಕ್ಕಳ ಹಬ್ಬ
ಈ ನಾಗರ ಪಂಚಮಿ ಹಬ್ಬ ಅಂದರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಡಗರ ಅದರಲ್ಲೂ ಮದುವೆ ಅದ ಹೆಣ್ಣು ಮಕ್ಕಳಿಗೆ ಖುಷಿ
ಯಾಕೆಂದರೆ ತವರಿನ ಉಡುಗೊರೆಗೆ ಹಾತೊರೆಯುತ್ತಯಿರುತ್ತರೆ, ಸಂಪ್ರದಾಯಿಕ ಉಡುಗೆ ತೊಟ್ಟು ಮನೆ ತುಂಬಾ ಓಡಾಡುವುದನ್ನ ನೋಡುವುದೇ ಚಂದ. ನಾಗರ ಕಟ್ಟೆಗೆ ಹೋಗಿ ನಮಿಸಿ ಪೂಜೆ ಸಲ್ಲಿಸಿ ನಾಗನ ಕೃಪೆಗೆ ಪಾತ್ರರಾಗುತ್ತಾರೆ.
ಸಂತಾನ ಇಲ್ಲದವರು ನಾಗ ದೇವರಲ್ಲಿ ಮೊರೆಯಿಟ್ಟುತ್ತಾರೆ.
ನಾಗನ ಪೂಜೆ ಮಾಡುವ ಮೂಲಕ ಶಿವನ  ಕೃಪೆಗೆ ಪಾತ್ರರಾಗುತ್ತಾರೆ. ಈ ನಾಗರ ಪಂಚಮಿ ಎಂದು ನಾಗನಿಗೆ ಪೂಜೆ ಸಲ್ಲಿಸಿದ್ದಾರೆ ಅಣ್ಣನ ಆಯಸ್ಸು ಹೆಚ್ಚು ಆಗುತ್ತೆ ಎಂಬ ನಂಬಿಕೆ ನಮ್ಮ ಹೆಣ್ಣು ಮಕ್ಕಳದು

ಎಲ್ಲ ತರಹದ ಸಮಸ್ಯೆಗೆ ಪರಿಹಾರ ನಾಗರಾಧನೆ.
ಪುರಾಣದ ನಂಬಿಕೆಯ ಪ್ರಕಾರ ನಾಗಪಂಚಮಿಯ ದಿನದಂದು ನಾಗದೇವತೆಯನ್ನು ಪೂಜಿಸುವುದರಿಂದ ರಾಹು, ಕೇತುಗಳಂತಹ ಗ್ರಹಗಳ ದುಷ್ಪರಿಣಾಮಗಳಿಂದ ವ್ಯಕ್ತಿಯನ್ನು ರಕ್ಷಿಸಬಹುದು. ಜೀವನದ ಸಂಕಷ್ಟಗಳನ್ನು ಕಡಿಮೆ ಮಾಡಲು ನಾಗಪಂಚಮಿಯ ದಿನದಂದು ಶಿವನಿಗೆ ರುದ್ರಾಭಿಷೇಕವನ್ನು ಅರ್ಪಿಸಿ, ಬೆಳ್ಳಿಯ ಸರ್ಪವನ್ನು ಜೋಡಿಯಾಗಿ ದೇವರಿಗೆ ಅರ್ಪಿಸಿದ್ದಾರೆ ನಾಗ ದೋಷ ಪರಿಹಾರ ಆಗುತ್ತದೆ.
ನಾಗರ ಪಂಚಮಿಯ ದಿನದಂದು ನಾಗ ದೇವರನ್ನು ಪೂಜಿಸುವುದರಿಂದ ಕಾಳಸರ್ಪ ದೋಷಗಳಿಂದ ಮುಕ್ತಿ ದೊರೆಯುತ್ತದೆ. ನಾಗ ದೇವರನ್ನು ಮನೆಯ ರಕ್ಷಕ ಎಂದೂ ಪೂಜಿಸುತ್ತಾರೆ .ಈ ದಿನ ನಾಗ ದೇವರನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ, ನಿಯಮಗಳು ಮತ್ತು ವಿಧಿ - ವಿಧಾನಗಳ ಮೂಲಕ ಪೂಜೆ ಕೈಂಕರ್ಯಗಳನ್ನು ಮಾಡುವುದರಿಂದ, ಮಹಾದೇವನು ಪ್ರಸನ್ನನಾಗುತ್ತಾನೆ ಮತ್ತು ವ್ಯಕ್ತಿಯ ಪ್ರತಿಯೊಂದು ಆಸೆಯನ್ನು ಪೂರೈಸುತ್ತಾನೆ ನಂಬಿಕೆ ಇಲ್ಲಿನ ಜನರದು

ನಾಗನಿಗೂ ಕರಾವಳಿಗೂ ಅವಿನಾಭಾವ ಸಂಬಂಧ.
ನಾಗದೇವರ ಆರಾಧನೆ ಹಲವು ಭಾಗಗಳಲ್ಲಿ ಹಲವು ವಿಧಗಳಲ್ಲಿ ನಡೆಯುತ್ತದೆ.
ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ನಾಗನಿಗಿದ ವಿಶೇಷ ಸ್ಥಾಮಾನವಿದೆ
ದಕ್ಷಿಣ ಕನ್ನಡದ ಹೆಚ್ಚಿನ ಮನೆಗಳಲ್ಲಿ ನಾಗಬನವಿರುತ್ತದೆ. ಈ ದಿನ ನಾಗನಿಗೆ ತಂಬಿಲ, ನಾಗನ ಕಲ್ಲಿಗೆ ಹಾಲೆರೆಯುವ ಸಂಪ್ರದಾಯವಿದೆ.ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ನಾಗನಿಗಿದ ವಿಶೇಷ ಸ್ಥಾನವಿದ್ದೆ
ಅದರಲ್ಲೂ ನಾಗರ ಪಂಚಮಿಯಂದು ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಅಂತಹ ನಾಗಾರಾಧನೆ ಹೆಸರುವಾಸಿ ದೇವಾಲಯದಲ್ಲಿ  ವಿಶೇಷ ಪೂಜೆ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ ನಡೆಯಲಿದೆ
ಹೀಗೆ ಹತ್ತು ಹಲವು ವಿಶೇಷ ಪೂಜೆ ಸಲ್ಲಿಸಿ ಸರ್ಪ ದೇವನ ಕೃಪೆಗೆ ಪಾತ್ರರಾಗುತ್ತಾರೆ.

ಆಚರಣೆ ಆಚರಣೆಯಾಗಿರಲಿ ಮೂಡನಂಬಿಕೆ ಆಗದಿರಲಿ
ಹಾವುಗಳಿಗೆ ಹಾನಿ ಮಾಡುವುದನ್ನು ಅಥವಾ ಸೆರೆಹಿಡಿಯುವುದನ್ನು ತಪ್ಪಿಸಿ, ಹಾಲನ್ನು ಅತಿಯಾಗಿ ಹೆಚ್ಚು ಬಳಸಿ ವ್ಯರ್ಥ ಮಾಡಬೇಡಿ ಮತ್ತು ಹಾವುಗಳ ಸುರಕ್ಷತೆಗೆ ಆದ್ಯತೆ ನೀಡಿಬೇಕು ಹಾಲನ್ನ  ಅರಶಿನವನ್ನು ಹಾವುಗಳಿಗೆ ಎರಚುವ ಮೂಲಕ ಹಾವುಗಳ ಜೀವಕ್ಕೆ ಕುತ್ತುತರುತ್ತಾರೆ. ನಮ್ಮ ಮೂಡನಂಬಿಕೆ ಮೂಕ ಜೀವಿಗಳ ಸಾವಿಗೆ ಕಾರಣ ಆಗಬೇಡಿ.
ನಾಗರ ಪಂಚಮಿ ಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಿ ನಾಗದೇವರ ಕೃಪೆಗೆ ಪಾತ್ರರಾಗಿ.
ನಾಡಿನ ಜನತೆ ನಾಗರ ಪಂಚಮಿ ಹಬ್ಬದ ಶುಭಾಶಯಗಳು.

Ads on article

Advertise in articles 1

advertising articles 2

Advertise under the article