-->
ಮಂಗಳೂರು: ಇದು ಮಂಗಳಮುಖಿಯರ ಕಥಾನಕದ ಸಿನಿಮಾ - ಇಲ್ಲಿ ನಟಿಯರು, ನಿರ್ಮಾಪಕರು ಮಂಗಳಮುಖಿಯರೇ

ಮಂಗಳೂರು: ಇದು ಮಂಗಳಮುಖಿಯರ ಕಥಾನಕದ ಸಿನಿಮಾ - ಇಲ್ಲಿ ನಟಿಯರು, ನಿರ್ಮಾಪಕರು ಮಂಗಳಮುಖಿಯರೇ


ಮಂಗಳೂರು: ಮಂಗಳಮುಖಿಯರ ಜೀವನ ಆಧರಿತ ವಸ್ತುಗಳನ್ನಿರಿಸಿ ಬಹಳಷ್ಟು ಸಿನಿಮಾಗಳು ತೆರೆಕಂಡಿವೆ. ಅಲ್ಲಿ ನಟರೇ ಮಂಗಳಮುಖಿಯರಾಗಿ ಅಭಿನಯಿಸಿದ್ದರು. ಆದರೆ ಸದ್ಯ ತೆರೆ ಕಾಣಲಿರುವ ಶಿವಲೀಲಾ ಸಿನಿಮಾದಲ್ಲಿ ಮಂಗಳಮುಖಿಯರೇ ನಟಿಯರಾಗಿ ಅಭಿನಯಿಸಿದ್ದಾರೆ‌. ಅಲ್ಲದೆ ಇಬ್ಬರು ಮಂಗಳಮುಖಿಯರು ಸಹ ನಿರ್ಮಾಪಕರಾಗಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.

ಹೌದು... ಮಂಗಳಮುಖಿಯರ ಜೀವನಾಧಾರಿತ ಶಿವಲೀಲಾ ಎಂಬ ಕನ್ನಡ ಸಿನಿಮಾವೊಂದು ಚಿತ್ರೀಕರಣ ನಡೆಯುತ್ತಿದ್ದು, 70ಪ್ರತಿಶತ ಸಿನಿಮಾ ಕೆಲಸ ನಡೆದಿದೆ. ಇನ್ನು 30% ಸಿನಿಮಾ ಚಿತ್ರೀಕರಣದ ಕೆಲಸ ಬಾಕಿಯಿದೆ. ಕ್ಲೈಮ್ಯಾಕ್ಸ್‌ನ ಈ ದೃಶ್ಯವನ್ನು ಚಿತ್ರೀಕರಿಸಲು ತಂಡ ಮಂಗಳೂರಿನಲ್ಲಿ ಬೀಡುಬಿಟ್ಟಿದೆ. ಮಂಗಳೂರಿನ ಆಸುಪಾಸಿನ ಪ್ರದೇಶದಲ್ಲಿ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಣವಾಗಲಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಮಂಗಳಮುಖಿಯರೇ ಪಾತ್ರ ನಿರ್ವಹಿಸಿದ್ದಾರೆ‌. 15ರಷ್ಟು ಮಂದಿ ಮಂಗಳಮುಖಿಯರು ಮುಖ್ಯಪಾತ್ರ ನಿರ್ವಹಿಸಿದ್ದರೆ. ಕ್ಲೈಮ್ಯಾಕ್ಸ್‌ ಹಂತದಲ್ಲಿ ಸುಮಾರು ಎರಡು ಸಾವಿರದಷ್ಟು ಮಂಗಳಮುಖಿಯರು ಪಾತ್ರ ನಿರ್ವಹಿಸಲಿದ್ದಾರೆ ಎಂದು ಸಿನಿಮಾ ತಂಡ ಹೇಳಿದೆ.


ಜಾನಪದ ಕಲಾವಿದೆ ಮಂಜಮ್ಮ ಜೋಗತಿಯವರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಜೊತೆಗೆ ಹನಿ ಮಂಗಳೂರು ಎಂಬ ಮಂಗಳಮುಖಿ ಸಿನಿಮಾದಲ್ಲಿ ಪಾತ್ರ ನಿರ್ವಹಿಸುವುದರೊಂದಿಗೆ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ರಾಶಿ, ಪವಿತ್ರ ಸೇರಿದಂತೆ ನಾಲ್ಕೈದು ಮಂಗಳಮುಖಿಯರು ಖಳನಾಯಕಿಯಾಗಿ ವಿಜೃಂಭಿಸಿದ್ದಾರೆ. ಸೋಶಿಯಲ್ ಮೀಡಿಯಾ ಸ್ಟಾರ್ ದಚ್ಚು ದಿವಾಕರ್ ಅವರು ಈ ಸಿನಿಮಾದಲ್ಲಿ ಮೊದಲಬಾರಿಗೆ ನಾಯಲರಾಗಿ ಬಣ್ಣ ಹಚ್ಚಿದ್ದಾರೆ‌‌.

ನಿರ್ಮಾಪಕ - ನಿರ್ದೇಶಕರಾಗಿ ಅಶೋಕ್ ಜಯರಾಂ ಮಂಗಳಮುಖಿಯರ ಮೇಲಿನ ಕಾಳಜಿಯಿಂದ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಒಟ್ಟಿನಲ್ಲಿ ನಾನು ಅವನಲ್ಲ ಅವಳು, ಕಲ್ಪನಾದಂತಹ ಮಂಗಳಮುಖಿಯರ ಸಿನಿಮಾ ಕನ್ನಡದಲ್ಲಿ ಸೆಟ್ಟೇರಿದ್ದರೂ, ಶಿವಲೀಲಾದಲ್ಲಿ ಮಂಗಳಮುಖಿಯರೇ ಸಿನಿಮಾದಲ್ಲಿ ಅಭಿನಯಿಸಿದ್ದು ವಿಶೇಷವೆನಿಸಿದೆ.


Ads on article

Advertise in articles 1

advertising articles 2

Advertise under the article