ಸಕ್ಕರೆ ಕಾರ್ಖಾನೆ ಮರು ಸ್ಥಾಪನೆ ಹೋರಾಟಕ್ಕೆ ಕಾರ್ಕಳ ಇಂಟಕ್ ಬೆಂಬಲ
Monday, February 24, 2025
ಕಾರ್ಕಳ: ಬ್ರಹ್ಮವರ ಸಕ್ಕರೆ ಕಾರ್ಖಾನೆ ಮರುಸ್ಥಾಪನೆ ಹೋರಾಟಕ್ಕೆ ಕಾರ್ಕಳ ಇಂಟಕ್ ನ ಪದಾಧಿಕಾರಿಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಈ ಬಗ್ಗೆ ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಬೆಂಬಲ ಪತ್ರ ನೀಡಿರುವ ಕಾರ್ಕಳ ವ ಲಯ ಇಂಟಕ್ ನ ಪ್ರೀತಿ ವೈ ಕುಂದಾಪಯರ ಅವರು INTUC ಬೆಂಬಲ ಪ್ರತಾಪ್ ಚಂದ್ರ ಶೆಟ್ಟಿಯವರ ಹೋರಾಟಕ್ಕೆ ಸದಾ ಇದೆ ಎಂದು ತಿಳಿಸಿದೆ.
ಈ ಸಂದರ್ಭದಲ್ಲಿ ಪ್ರತಾಪ್ ಚಂದ್ರ ಶೆಟ್ಟಿ,ವಿನಯ ಕುಮಾರ್ ಸೊರಕೆ, ಜಿಲ್ಲಾ ಇಂಟಕ್ ಅಧ್ಯಕ್ಷ ಕಾಬೆಟ್ಟು ಕಿರಣ್ ಹೆಗ್ಡೆ,ಮುರು ಶೆಟ್ಟಿ, ಕೀರ್ತಿ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಶಶಿಧರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.