
ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ವಿಧಿವಶ
Saturday, March 8, 2025
ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ವಿಧಿವಶ
ಮಂಗಳೂರು ಮಹಾನಗರ ಪಾಲಿಕೆಯ ಉಪ ಮೇಯರ್ ಆಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಮುಹಮ್ಮದ್ ಕುಂಜತ್ತಬೈಲ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನೇರ ನಡೆ ನುಡಿಯ ಸರಳ ಸಜ್ಜನಿಕೆಗೆ ಹೆಸರುವಾಸಿಯಾಗಿದ್ದ ಅವರು ಸಮಾಜದ ತಳ ಸಮುದಾಯದ ಜೊತೆಗೆ ನಿಕಟವಾದ ಸಂಬಂಧವಿಟ್ಟುಕೊಂಡಿದ್ದರು.
ಕುಂಜತ್ತಬೈಲ್ ವಾರ್ಡ್ನ ಕಾರ್ಪೊರೇಟರ್ ಆಗಿದ್ದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸದ್ದು ಮಾಡಿದವರು. ಬಳಿಕ ಜನತಾ ದಳದಿಂದ ತಮ್ಮ ರಾಜಕೀಯ ಕಂಡುಕೊಂಡಿದ್ದು, ಕಾಂಗ್ರೆಸ್ಗೆ ಸೇರ್ಪಡೆಯಾದ ಬಳಿಕವೂ ಸುದೀರ್ಘ ಅವಧಿಯಲ್ಲಿ ಜನಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟರು.
ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ಬಡ ಹಾಗೂ ಶೋಷಿತ ಕುಟುಂಬಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
ಸುಮಾರು 900 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಬಡ ಕುಟುಂಬಗಳ ಆಶ್ರಯದಾತರಾಗಿದ್ದು ಮುಹಮ್ಮದ್ ಅವರ ಹಿರಿಮೆ.